Tuesday, April 19, 2011

Engineers day, 15th September

"Remember , your work may be only to sweep a railway crossing, but it is your duty to keep it so clean that no other crossing in the world is as clean as yours"

"Education is the sovereign remedy for all economic ills, higher the standard of education and science applied to industrial calling, greater the wealth produced.
We must develop the life and capacity of our people by encouraging in them self-help, power of initiative, courage to change and courage to create new things, a spirit of co-operation and a capacity of organization"

Sir Mokshagundam Visveshvarayya (popularly known as Sir M.V.) (September 15, 1860-April 12, 1962) was an eminent Indian engineer and statesman. He is a recipient of the Indian Republic’s highest honor, the Bharat Ratna, in 1955. He was also knighted by the British for his myriad contributions to the public good. Every year 15th September is celebrated as the Engineer’s Day.

Thursday, December 9, 2010

Nokia Kannada Rajyothsava 2010 - "Namma nadu namma Hemme"









ನಮ್ಮ ನೋಕಿಯಾ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಬಗ್ಗೆ ನನ್ನ ಈ ಚಿಕ್ಕ
ಲೇಖನವನ್ನು ನಿಮಗೆ ಸಮರ್ಪಿಸುತ್ತಿದ್ದೇನೆ. ನಮ್ಮ ಸಂಸ್ಥೆಯ ಸಹೋದ್ಯೋಗಿಗಳ ಸಹಯೋಗ
ಹಾಗು ಅನುದಾನದಿ೦ದ ನಾವು ನೋಕಿಯದಲ್ಲಿ ಮೊದಲ ಕನ್ನಡ ರಾಜ್ಯೋತ್ಸವವನ್ನು ಹಮ್ಮಿ
ಕೂ೦ಡೆವು. " ನಮ್ಮ ನಾಡು, ನಮ್ಮ ಹೆಮ್ಮೆ " ಎನ್ನುವ ಅಭಿಮಾನವನ್ನು ಎಲ್ಲರೂ ತು೦ಬು
ಹೃದಯದಲಿ ಸ್ವಾಗತಿಸಿ. ಕಾರ್ಯಕ್ರಮಕ್ಕೆ ಎಲ್ಲರು ದೇಣಿಗೆ ಕೊಟ್ಟು ಸಹಕರಿಸಿ,
ಪುರಸ್ಕರಿಸಿ, ತಮ್ಮ ಅಭಿಮಾನವನ್ನು ಮರೆದರು.ನಾವು ಹಮ್ಮಿಕೊ೦ಡ ಕೆಲವು ಕಾರ್ಯಕ್ರಮಗಳ
ವಿವರ ಹ೦ಚಿಕೊಳ್ಳುತ್ತಿದ್ದೇನೆ.

೧೨/೧೧/೨೦೧೦ : ಕನ್ನಡ ರಾಜ್ಯೋತ್ಸವದ ಉದ್ಘಾಟನ ಸಮಾರಂಭ

ಕನ್ನಡ ರಾಜ್ಯೋತ್ಸವದ ಉದ್ಘಾಟನ ಸಮಾರಂಭವನ್ನು ಮು೦ಜಾನೆ ೧೦.೨೯ಕ್ಕೆ
ಹಮ್ಮಿಕೂ೦ಡಿದ್ದೆವು . ನಮ್ಮ ಸ೦ಸ್ಥೆಯ ಹಿರಿಯರಾದ ಶ್ರೀ ಪ್ರತಾಪ್ ಸಿ೦ಹ, ಶ್ರೀ
ಭಾಸ್ಕರ್, ಶ್ರೀ ಅನಿರುದ್ದ ಮಾತುರಿಯ, ಶ್ರೀ ಸ೦ಜೀವ ಪ್ರಸಾದರವರು ದೀಪವನ್ನು ಬೆಳಗುವ
ಮೂಲಕ ಚಾಲನೆಯನ್ನು ನೀಡಿದರು. ಸುಷ್ಮ , ಸರಿತ, ಅನುಪಮ, ಪದ್ಮ, ಬ್ರಿಜೇಶ್ ,
ಬಾಲಾಜಿ,ಕುಮಾರ್ ,ಶ್ರೀವತ್ಸಮತ್ತು ಸ೦ಗಡಿಗರು ನಾಡಗೀತೆಯಾದ ಜಯ ಭಾರತ ಜನನಿಯ ತನುಜಾತೆ
ಹಾಗು ಹಚ್ಚೇವು ಕನ್ನಡದ ದೀಪ ಗೀತೆಯನ್ನು ಹಾಡಿದರು, ಅನ೦ತರ ಅರವಿ೦ದ ತಣ್ಣೀರುಬಾವಿ
ಅವರು ರಾಜ್ಯೋತ್ಸವದ ಬಗ್ಗೆ ಚಿಕ್ಕ ಭಾಷಣವನ್ನು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ
ಸ೦ಧ್ಯಾ, ರ೦ಜಿನಿ ಮತ್ತು ಸ೦ಗಡಿಗರು ಜೋಗದ ಸಿರಿ ಬೆಳಕಿನಲ್ಲಿ ಗೀತೆಯನ್ನು ಹಾಡಿ
ಕಾರ್ಯಕ್ರಮಕ್ಕೆ ಮೆರಗನ್ನು ತ೦ದರು. ನ೦ತರ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ,
ಸಮಸ್ತ ನೋಕಿಯ ಸ೦ಸ್ಥೆಯಲ್ಲಿ ಮೈಸೊರುಪಾಕ್ ಸಿಹಿ ಹ೦ಚಲಾಯಿತು. ಕಾರ್ಯಕ್ರಮದ
ನಿರೋಪಣೆಯನ್ನು ಪದ್ಮ ಮತ್ತು ಬಾಲಾಜಿ ಯಶಸ್ವಿಯಾಗಿ ನೆಡಸಿಕೊಟ್ಟರು.

ಕನ್ನಡ ರಾಜ್ಯೋತ್ಸವದ ಅ೦ಗವಾಗಿ ಕೆಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿವರ
ಕೆಳಗಿನ೦ತಿದೆ.

೧೭.೧೧.೨೦೧೦ - ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

೧೮.೧೧.೨೦೧೦ - ರ೦ಗೋಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

೨೨.೧೧.೨೦೧೦ - ಕೊಲಾಜ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ..

೨೯.೧೧.೨೦೧೦ - ಕಾರ್ಯ ಸ್ಥಳದ ಅಲ೦ಕಾರ ಸ್ಪರ್ಧೆಯನ್ನು ಅಯೋಜಿಸಿದ್ದೆವು.

೩೦.೧೧.೨೦೧೦ - ಛಾಯಾಚಿತ್ರ ಸ್ಪರ್ಧೆ ಹಾಗು ಪ್ರದರ್ಶನವನ್ನು ಹಮ್ಮಿ ಕೊಳ್ಳಲಾಗಿತ್ತು. .

೩೦.೧೧.೨೦೧೦ - ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭ

ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭವನ್ನು ಮಧ್ಯಾನ್ಹ ೩.೦೦ ಗ೦ಟೆಗೆ ಅರ೦ಭವಾಯಿತು,
ಡೊಳ್ಳು ಕುಣಿತವನ್ನು ನಮ್ಮ ನೋಕಿಯಾ ಸಂಸ್ಥೆಯ ಕಟ್ಟದ ಮುಖ್ಯವಾಹಿನಿಗಳಲ್ಲಿ
ಪ್ರದರ್ಶಿಸಲಾಯಿತು. ಕನ್ನಡದ ಖ್ಯಾತ ಕವಿಗಳ ಭಾವಗೀತೆಗಳನ್ನು ಸುಷ್ಮ , ವಾಣಿ,
ಚಿನ್ಮಯಿ, ಸಿ೦ಧು ಮತ್ತು ಬ್ರಿಜೇಶ್ ಹಾಡಿ ನೆರೆದ ಪ್ರೇಕ್ಷಕರನ್ನು
ಮೂಕಸ್ಮಿತರನ್ನಾಗಿಸಿದರು. ನ೦ತರ ಡೋಳ್ಳು ಕುಣಿತ ಪ್ರೇಕ್ಷಕರ ಉತ್ಸಾಹವನ್ನು
ಇಮ್ಮಡಿಸಿತು. ಸರಿತ ಪ್ರಸನ್ನ ಅವರು ಅಯೋಜಿಸಿದ್ದ ಕನ್ನಡ ನಾಡಿನ ಉಡುಗೆ ತೊಡುಗೆಗಳ
ಸಂಪ್ರದಾಯಿಕ ಪ್ರದರ್ಶನದ ನಿರೂಪಣೆ ಪ್ರೇಕ್ಷಕರ ಸಿಳ್ಳೆ ಮತ್ತು ಚಪ್ಪಾಳೆಗಳಿಗೆ
ಅ೦ತ್ಯವೇ ಇಲ್ಲ. ಜಗದೀಶ ಅವರ ವೀರ ಕನ್ನಡಿಗ ಚಿತ್ರದ ಹಾಡಿಗೆ ತಾಳಹಾಕಿದರು. ಭವ್ಯ
ಮತ್ತು ಸ೦ಗಡಿಗರು ರತ್ನ ಮ೦ಜರಿ ಚಿತ್ರದ " ಗಿಲಿ ಗಿಲಿ ಗಿಲಕ್ಕು" ಹಾಡಿನ ನೃತ್ಯಕಲೆಗೆ
ಪ್ರೇಕ್ಷಕರ ಕರಾಡತನ ಮುಗಿಲು ಮುಟ್ಟಿತು.

ಶ೦ಕರ್, ವೇಣು ಮತ್ತು ಸ೦ಗಡಿಗರು ನಡೆಸಿಕೊಟ್ಟ ವಾದ್ಯಗಳ ಸ೦ಗೀತ ಕಛೇರಿಯು ಭೂಲೋಕದಲ್ಲಿ
ಗಾ೦ಧರ್ವ ಲೋಕವನ್ನು ಸೃಷ್ಟಿ ಮಾಡಿತ್ತು.

ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭಕ್ಕೆ ಅಗಮಿಸಿದ ಆತಿಥಿಗಳಾದ ಶ್ರೀ ಮಹೇಶ್
ಪಾಟೀಲ್, ಶ್ರೀ ಅನಿರುದ್ದ ಮಾತುರಿಯ ಮತ್ತು ಶ್ರೀ ಸ೦ಜೀವ ಪ್ರಸಾದರವರು
ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಶ್ರೀ ಅನಿರುದ್ದ
ಮಾತುರಿಯರವರು ಕಾರ್ಯಕ್ರಮದ ಬಗ್ಗೆ ಚುಟುಕು ಭಾಷಣ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಬ್ರಿಜೇಷ್ ಅವರ ಮಯೂರ ಚಲನಚಿತ್ರದ ಅಣ್ಣನವರ ಮಾತಿನ
ಅನುಕರಣೆ, ಅನುಪಮ ರಾವ್, ಕೃಷ್ಣ ಮತ್ತು ಪವನೇಷ್ ಅವರು ರಾಕ್ ಮತ್ತು ಪಾಪ್ ಮಾದರಿಯ
ಕನ್ನಡ ಹಾಡುಗಳು ಎಲ್ಲರ ಮನಸೊರೆಗೊ೦ಡವು.

ಕಾರ್ಯಕ್ರಮದ ನಿರೋಪಣೆಯಲ್ಲಿ ನಿರೂಪಕರಾದ ಪದ್ಮ ಅವರು ಪ್ರೇಕ್ಷಕರ ಲವಲವಿಕೆಯನ್ನು
ತಮ್ಮ ವಾಕ್ಚತುರ್ಯದಿ೦ದ ಮ೦ತ್ರ ಮುಗ್ದರನ್ನಾಗಿಸಿದರು.

ಕೊನೆಗೂ ಒ೦ದು ಉಲ್ಲಾಸಬರಿತ , ವರ್ಣರ೦ಜಿತ ಕಾರ್ಯಕ್ರಮ ತೆರೆಕ೦ಡಿತು. ನಾವು ಹೊಸ
ಮನ್ವಂತರಕ್ಕೆ ಮುನ್ನುಡಿ ಬರೆದೆವು.